ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ,
ಮಾತೆಲ್ಲ ಮುಗಿದ ಮೇಲೆ, ದನಿಯೊಂದು ಕಾಡಿದೆ,
ಹೇಳುವುದು ಏನು ಉಳಿದು ಹೋಗಿದೆ,
ಹೇಳಲಿ ಹೇಗೆ ತಿಳಿಯದಾಗಿದೆ
ನೋವಿನಲ್ಲಿ ಜೀವ ಜೀವ ಅರಿತ ನಂತರ
ನಲಿವು ಬೇರೆ ಏನಿದೆ,ಏಕೆ ಅಂತರ
ನಿನ್ನ ಹಾಡಿನಲ್ಲಿ ಇಂದು ಬೆರೆವ ಕಾತರ
ಒಂದೆ ಸಾರಿ ನೀ ಕೇಳೆಯಾ ಈ ಸ್ವರ
ಮನಸ್ಸಲ್ಲಿ ಚೂರು ಜಾಗ ಬೇಕಿದೆ,ಕೇಳಲಿ ಹೇಗೆ ತಿಳಿಯದಾಗಿದೆ.
ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ,
ಮಾತೆಲ್ಲ ಮುಗಿದ ಮೇಲೆ, ದನಿಯೊಂದು ಕಾಡಿದೆ.
ಕಣ್ಣು ತೆರೆದು ಕಾಣುವ ಕನಸೆ ಜೀವನ
ಸಣ್ಣ ಹಟವ ಮಾಡಿದೆ, ಹೃದಯ ಈ ದಿನ
ಎದೆಯ ದೂರವಾಣಿಯ ಕರೆಯ ರಿಂಗನ,
ಕೇಳು ಜೀವವೆ, ಏತಕೀ ಕಂಪನ
ಹೃದಯವು ಇಲ್ಲೆ ಕಳೆದು ಹೋಗಿದೆ,
ಹುಡುಕಲೆ, ಹೇಗೆ ತಿಳಿಯದಾಗಿದೆ
ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ,
ಮಾತೆಲ್ಲ ಮುಗಿದ ಮೇಲೆ, ದನಿಯೊಂದು ಕಾಡಿದೆ.
ಹೇಳುವುದು ಏನು ಉಳಿದು ಹೋಗಿದೆ,
ಹೇಳಲಿ ಹೇಗೆ ತಿಳಿಯದಾಗಿದೆ
No comments:
Post a Comment