Tuesday 14 August 2012

ದೂರದ ಊರಿಂದ ಹಮ್ಮೀರ ಬಂದ

ಗಾಯಕರು : ಎಸ್.ಪಿ.ಬಿ ಮತ್ತು ಎಸ್.ಜಾನಕಿ
ರಚನೆ: ಆರ್.ಎನ್. ಜಯಗೋಪಾಲ್
ಸಂಗೀತ: ಶಂಕರ್-ಗಣೇಶ್

ದೂರದ ಊರಿಂದ ಹಮ್ಮೀರ ಬಂದ
ಜರತಾರಿ ಸೀರೆ ತಂದ
ಅದರಲ್ಲಿ ಇಟ್ಟೀನಿ ಈ ನನ್ನ ಮನಸನ್ನ
ಜೋಪಾನ ಜಾಣೆ ಎಂದ
ಉಟ್ಟಾಗ ನನಗಂತೂ ಮೈಯೆಲ್ಲ ಜುಮ್ಮಂತು
ಆ ಒಂದು ಚಣ ನನ್ನ ಮನ ಎಲ್ಲೋ ತೇಲೋಯ್ತು

ನೀ ಮುಡಿದ ಮಲ್ಲಿಗೆ ಹೂವಿನ ಗಂಧ
ಕರೆ ತಂತು ಊರಿಂದ
ಕಣ್ತುಂಬ ನೋಡ್ದಾಗ ಈ ನಿನ್ನ ಅಂದ
ಶುರುವಾಯ್ತು ಹೊಸ ಬಂಧ
ಎದೆ ತಾಳ ತಪ್ಪೋಯ್ತು
ನನಗೆಲ್ಲಾ ಮರ್ತೋಯ್ತು
ಆ ಒಂದು ಚಣ ನನ್ನ ಮನ
ಎಲ್ಲೋ ತೇಲೋಯ್ತು

ನೀ ಹೆಜ್ಜೆ ಇಟ್ಟಲ್ಲಿ ಚೆಲುವೆ
ಎಲ್ಲೆಲ್ಲಿ ಅರಳಾವೆ ಹೂವೆ
ಮಿಂಚಂಗೆ ನಗುವಂತೆ ಗೊತ್ತು
ಮಳೆ ಹಂಗೆ ಸುರಿದಾವೆ ಮುತ್ತು
ಈ ಮಾತಿನ ಬಲೆಯನು ನೀ ಬೀಸಿದೆ
ಇದೇನಿದು ಅದರಲಿ ವಶವಾಗಿದೆ
ತುಟಿಯಿದು ಸೊಗಸು
ಇದರ ರುಚಿಯಿನ್ನು ಸೊಗಸು
ತುಟಿಯೇ ಸಿಗದೆ
ಇನ್ನು ಬಯಸಿದೆ ಮನಸು
ಹಸಿವು ನಿದ್ದೆ ಹಾಳಾಗೊಯ್ತು
ಎಲ್ಲಾ ನಿನ್ನಿಂದಾ

ನೀ ಮುಡಿದ ಮಲ್ಲಿಗೆ ಹೂವಿನ ಗಂಧ
ಕರೆ ತಂತು ಊರಿಂದ
ಕಣ್ತುಂಬ ನೋಡ್ದಾಗ ಈ ನಿನ್ನ ಅಂದ
ಶುರುವಾಯ್ತು ಹೊಸ ಬಂಧ
ಎದೆ ತಾಳ ತಪ್ಪೋಯ್ತು
ನನಗೆಲ್ಲಾ ಮರ್ತೋಯ್ತು
ಆ ಒಂದು ಚಣ ನನ್ನ ಮನ
ಎಲ್ಲೋ ತೇಲೋಯ್ತು

ಮುಂಜಾನೆ ಕನಸಿನ ವೇಳೆ
ನೀ ಬಂದೆ ಅಂಬಾರಿ ಮೇಲೆ
ನಂಗಾಗಿ ನೀ ಆಗ ತಂದೆ
ಸುಗಂಧರಾಜದ ಮಾಲೆ
ಆ ತಾವರೆ ಚೆಲುವೆಯ ಕಣ್ಣಾಯಿತೋ
ಆ ಮೋಡವೇ ಕಂಗಳ ಕಪ್ಪಾಯಿತೋ
ಉಸಿರಿದು ಭಾರ ನೀನು ಹೋದರೆ ದೂರ
ಆಸರೆಯಾಗಿ ತೋಳಾ ಸೆರೆ ಹಿಡಿ ಬಾರ
ನೀನೆ ನನ್ನ ಪ್ರಾಣಾ ಇನ್ನ ಕೇಳೆ ನನ್ ಚಿನ್ನಾ

ದೂರದ ಊರಿಂದ ಹಮ್ಮೀರ ಬಂದ
ಜರತಾರಿ ಸೀರೆ ತಂದ
ಅದರಲ್ಲಿ ಇಟ್ಟೀನಿ ಈ ನನ್ನ ಮನಸನ್ನ
ಜೋಪಾನ ಜಾಣೆ ಎಂದ

No comments:

Post a Comment